‘ಸಿಆರ್ಪಿಎಫ್ 51ನೇ ಬೆಟಾಲಿಯನ್ನಲ್ಲಿ12 ವರ್ಷ ಕೆಲಸ ಮಾಡಿದ್ದೇನೆ. ಮೇಲಧಿಕಾರಿಗಳು ಕರ್ತವ್ಯಲೋಪದ ಆರೋಪ ಹೊರಿಸಿ ಕೆಲಸದಿಂದ ತೆಗೆದು ಹಾಕಿದರು. ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದೆ. ಕೋರ್ಟ್ ಆದೇಶದ ಮೇಲೆ ಮರಳಿ ಹೈದರಾಬಾದ್ನ 42ನೇ ಬೆಟಾಲಿಯನ್ಗೆ ನಿಯೋಜನೆಗೊಂಡೆ. ಅಲ್ಲಿಂದ ಬೆಂಗಳೂರಿನ ತರಬೇತಿ ಕೇಂದ್ರಕ್ಕೆ ಕಳುಹಿಸಿದರು. ಆದರೆ, ಅಲ್ಲಿ, ಈ ಹಿಂದೆ ನನ್ನ ಮೇಲೆ ಆರೋಪ ಹೊರಿಸಿದ್ದ ಅಧಿಕಾರಿಯೇ ಮೇಲಧಿಕಾರಿಯಾಗಿ ಬಂದರು. ಸಿಗಬೇಕಾದ ಬಡ್ತಿ ಹಾಗೂ ನೀಡಬೇಕಾದ ವೈಯಕ್ತಿಕ ರೈಫಲ್ ಕೊಡದೇ ಸತಾಯಿಸಿದರು. 2016ರಲ್ಲಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದೆ. ಆದರೆ, ಇದನ್ನು ಪರಿಗಣಿಸದೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ. ಈಗ ಬಲವಂತವಾಗಿ ಹೊರ ಹಾಕಿದ್ದಾರೆ. ಸೇವಾ ದಾಖಲೆ ಕೇಳಿದರೂ ನೀಡುತ್ತಿಲ್ಲ’ ಎಂದು ಜೀವನಸಾಬ್ ಅಳಲು ತೋಡಿಕೊಂಡರು.