ಸಿನಿಮೋತ್ಸವದಲ್ಲಿ ಪ್ರಧಾನವಾಗಿ ಕಥನ ಕ್ರಮಗಳನ್ನು (ನಿರೂಪಣಾ ಕ್ರಮ) ಬದಲಾವಣೆಯ ಹಿನ್ನೆಲೆಯಲ್ಲಿ ಗಮನಿಸಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕಥನ ಕ್ರಮವನ್ನು ಕನ್ನಡ ಸಿನಿಮಾರಂಗ ಅಳವಡಿಕೊಳ್ಳಬಹುದು. ಅತಿಥಿಗಳ ಜತೆಗಿನ ಮುಖಾಮುಖಿ, ಭೇಟಿ, ಮಾತುಕತೆಯಿಂದ ಅಲ್ಲಿನ ಮತ್ತು ಇಲ್ಲಿನ ಚಿತ್ರ ತಯಾರಿಕೆಯ ಸಮಸ್ಯೆಗಳ ಕುರಿತು ಪರಸ್ಪರ ಪರಿಹಾರ ಕಂಡುಕೊಳ್ಳಬಹುದು. ಇದು ಒಬ್ಬರಿಗೊಬ್ಬರು ಮಾತನಾಡಿದರೆ ಮಾತ್ರ ಸೃಷ್ಟಿಯಾಗುವ ಸೇತುವೆ.