‘ಅಡಿಕೆ ಆರೋಗ್ಯಕ್ಕೆ ಹಾನಿಕಾರಕ’ ಎಂದು ಕೇಂದ್ರ ಸರ್ಕಾರ ಮತ್ತೆ ಗುಲ್ಲೆಬ್ಬಿಸಿದೆ. ಹಿಂದೆ ಇದೇ ರೀತಿಯ ಹೇಳಿಕೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಸಚಿವರ ಬಾಯಿಯಿಂದ ಬಂದಾಗ ಬಿಜೆಪಿಯವರು ಅದನ್ನು ಖಂಡಿಸಿ, ‘ನಾವು ಅಧಿಕಾರಕ್ಕೆ ಬಂದರೆ ಅಡಿಕೆ ಬೆಳೆಗಾರರ ಹಿತ ರಕ್ಷಿಸುತ್ತೇವೆ’ ಎಂದಿದ್ದರು. ಅಧಿಕಾರಕ್ಕೂ ಬಂದರು, ಆದರೆ ಯಥಾಪ್ರಕಾರ ಅಡಿಕೆ ನಿಷೇಧದ ಗುಮ್ಮ ಮತ್ತೆ ಸದ್ದು ಮಾಡುತ್ತಿದೆ. ಇದರ ಹಿಂದೆ ಯಾವ ಲಾಬಿ ಕೆಲಸ ಮಾಡುತ್ತಿದೆ?