ಪೀಠದ ಆಡಳಿತಾಧಿಕಾರಿ ಬಿ.ಎಸ್. ರವಿಶಂಕರ್ ಮಾತನಾಡಿ, ಜಾತಿ, ಮತ, ಪಂಥದ ಭೇದ ಇಲ್ಲದೆ ಶುದ್ಧ ಅಂತಃಕರಣದಿಂದ ಶಿವನ ಧ್ಯಾನ ಮಾಡುವ ಎಲ್ಲರಿಗೂ ಸ್ವಾಮೀಜಿ ಶಿವ ದೀಕ್ಷೆ ನೀಡುತ್ತಿದ್ದಾರೆ. ಇಲ್ಲಿಯ ವರೆಗೆ 13 ಲಕ್ಷ ಜನರಿಗೆ ದೀಕ್ಷೆ ನೀಡಿದ್ದಾರೆ. 4 ಲಕ್ಷ ಮಾತೆಯರಿಗೆ ಪೂಜಾ ವಿಧಾನ ಹೇಳಿಕೊಟ್ಟು ಅನುಗ್ರಹಿಸಿದ್ದಾರೆ ಎಂದರು. ಸಂಸದ ಪ್ರಹ್ಲಾದ್ ಜೋಶಿ ಇದ್ದರು.