ನನಗೆ ಒಂದು ಕೋಟಿ ರೂಪಾಯಿ ಸಿಕ್ಕಿದರೆ ಅದರಲ್ಲಿನ ದೊಡ್ಡ ಮೊತ್ತವನ್ನು ಮಂಗಳಮುಖಿಯರ ಸಮಸ್ಯೆಗಳನ್ನು ಪರಿಹರಿಸುವ ಕೆಲಸಗಳಿಗೆ ಬಳಸಿಕೊಳ್ಳುತ್ತೇನೆ.
ಉಳಿದ ಮೊತ್ತದಲ್ಲಿ ಬಡ ಜನರಿಗೆ, ಭಯಾನಕ ರೋಗಗಳಿಗೆ ತುತ್ತಾದ ರೋಗಿಗಳಿಗೆ ಸಹಾಯ ಮಾಡುವೆ. ಸಾಧ್ಯವಾದಷ್ಟು ರೈತರ ಸಾಲ ತೀರಿಸುವೆ. ನಾಡಿನ ಗಡಿ ಕಾಯುವ ಯೋಧರ ಕಷ್ಟಗಳಿಗೆ, ಹಾಗೆಯೇ ಹುತಾತ್ಮ ಯೋಧರ ಕುಟುಂಬದವರಿಗೆ ಸಹಾಯ ಮಾಡುವೆ. ಸ್ವಲ್ಪ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸುವೆ.