‘ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ವಿವಿಧ ರಾಜ್ಯಗಳಿಂದ ಅಥ್ಲೀಟ್ಗಳು ಬಂದಿದ್ದಾರೆ. ಆದರೆ ನೀರು, ಶೌಚಾಲಯ ಇತ್ಯಾದಿ ಕೊರತೆ ಕಾಡುತ್ತಿದೆ. ಹಿರಿಯ ನಾಗರಿಕರಿಗೆ ಈ ರೀತಿ ತೊಂದರೆ ಕೊಡುವುದು ಎಷ್ಟು ಸರಿ’ ಎಂದು ಮಹಾರಾಷ್ಟ್ರದಿಂದ ಬಂದಿರುವ ಅಂಜಲಿ ಶಾ ಕೇಳಿದರು. ಅವರ ಆರೋಪಕ್ಕೆ ರಾಜ್ಯದ ಜ್ಯೋತಿ ಉದಯಕುಮಾರ್ ದನಿಗೂಡಿಸಿದರು.