ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜು ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು ಕೆಸರು ಗದ್ದೆ ಓಟ, ಕೆಸರು ಗದ್ದೆಯಲ್ಲಿ ನೀರು ತುಂಬಿದ ಬಿಂದಿಗೆ ಹೊತ್ತು ಓಟ, ಕೂಸುಮರಿ ಓಟ ಸ್ಪರ್ಧೆಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ವಿಜೇತರಿಗೆ ಗ್ರಾಮದ ಮುಖಂಡರಾದ ಟಿ.ಶಿವಪ್ಪ, ಕೆಂಪರಾಜು ಬಹುಮಾನ ವಿತರಿಸಿದರು. ಮಧು ಕುಮಾರ್, ನಿಸರ್ಗ, ಚಿಕ್ಕಮೊಗ, ಇದ್ದರು.