ಸ್ವಾಮೀಜಿಯ ಕೈಕಾಲು ಕಟ್ಟಿ ‘ಮತ್ತು’ ಬರಿಸುವ ಚುಚ್ಚುಮದ್ದು ನೀಡಿ ಆರು ಜನರಿದ್ದ ತಂಡ ನಿಧಿಗಳ್ಳತನಕ್ಕೆ ಯತ್ನಿಸಿದೆ ಎನ್ನಲಾಗಿದೆ. ಸದಾನಂದ ಸ್ವಾಮೀಜಿ ರಾತ್ರಿ ಗುಡ್ಡದ ಕೆಳಗಿನ ಬಸವೇಶ್ವರ ದೇವಸ್ಥಾನದ ಬಳಿ ತಪೋನಿಷ್ಠರಾಗಿದ್ದರು. ದೇವಸ್ಥಾನದ ಅಡಿಪಾಯದಲ್ಲಿ ಇದೆ ಎನ್ನಲಾದ ನಿಧಿ ಕಳ್ಳತನಕ್ಕೆ ಕಳ್ಳರು ಮುಂದಾಗಿದ್ದರು ಎಂದು ತಿಳಿದು ಬಂದಿದೆ.