100ಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರು ದ್ವಿಚಕ್ರವಾಹನಗಳಲ್ಲಿ ‘ಹಸಿರ ರಕ್ಷಣೆ ನಮ್ಮೆಲ್ಲರ ಹೊಣೆ’, ‘ಹಸಿರ ನಡೆ ಉಸಿರ ಕಡೆ’, ‘ಹಚ್ಚ ಹಸಿರು ಸ್ವಚ್ಛ ಉಸಿರು’, ‘ಹಸಿರು ಬೆಳೆಸಿ ಮನುಕುಲ ಉಳಿಸಿ’, ‘ಹಸಿರು ಕ್ರಾಂತಿ ಮನುಕುಲಕ್ಕೆ ಶಾಂತಿ' ಎಂಬ ಘೋಷಣೆಗಳೊಂದಿಗೆ ಬೈಕ್ ಜಾಥ ನಡೆಸಿದರು. ಎಂಟನೇ ಮೈಲಿ, ದಾಸರಹಳ್ಳಿ ಮೆಟ್ರೋಸ್ಟೇಷನ್, ಪೈಪ್ ಲೈನ್ ರಸ್ತೆ ಮಾರ್ಗವಾಗಿ ಸಿದ್ದೇಶ್ವರ ಬಡಾವಣೆಯ ಉದ್ಯಾನದವರೆಗೆ ಜಾಥ ಸಾಗಿತು.