ನ್ಯಾಯಮೂರ್ತಿ ಎಚ್.ಜಿ.ರಮೇಶ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿವಾಹ ವಿಚ್ಛೇದನ ಕೋರಿಕೆ ಪ್ರಕರಣವೊಂದರಲ್ಲಿ, ‘ಮದುವೆ ಅನ್ನೋದೇ ಒಂದು ಸಮಸ್ಯೆ, ಅವುಗಳನ್ನೆಲ್ಲಾ ಮೀರಿ ನಿಲ್ಲುವುದೇ ಜೀವನ. ಯಾರು ಹೆಂಡತಿ ಮಾತು ಕೇಳುತ್ತಾರೊ ಅವರು ಯಶಸ್ವಿ ಜೀವನ ನಡೆಸುತ್ತಿದ್ದಾರೆ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.