ರಾಜ್ಯಕ್ಕೆ ಬೆಳಕು ನೀಡುವ ಆರ್ಟಿಪಿಎಸ್ ದೇವಸೂಗೂರು ಹೋಬಳಿ ಮಟ್ಟದ ಕಾಡ್ಲೂರು, ಶಕ್ತಿನಗರ, ಡಿ.ಯದ್ಲಾಪುರ, ಗುರ್ಜಾಪುರ, ಅರಷಿಣಿಗಿ, ಕರೇಕಲ್, ರಂಗಪುರ ಸುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಅನುಕೂಲ ಮಾಡಿಕೊಟ್ಟಿದೆ. ಈ ಭಾಗದ ರೈತರಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಬೆಳೆ ಬೆಳೆಯಲು ಅನುಕೂಲವಾಗಿದೆ ಎಂದು ಇಲ್ಲಿನ ನಿವಾಸಿಗಳಾದ ನಾಗರೆಡ್ಡಿ ಗುರ್ಜಾಪುರ, ವಿರೇಶಸಾಹುಕಾರ ಕಾಡ್ಲೂರು ಅವರು ಸಂತಸ ವ್ಯಕ್ತಪಡಿಸಿದರು.