’ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಎಳ್ಳಷ್ಟು ಅಭಿವೃದ್ಧಿ ಮಾಡದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಲ್ಲಿನ ಮತದಾರರನ್ನು ವಂಚಿಸಿ ಮುದ್ದೇಬಿಹಾಳಕ್ಕೆ ವಲಸೆ ಬಂದಿದ್ದಾರೆ. ಸ್ವಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸದವರು ಉತ್ತರ ಕರ್ನಾಟಕ ಅಭಿವೃದ್ಧಿ ಎಂದು ಬೊಬ್ಬೆ ಹಾಕುತ್ತಾರೆ. ಸೋಲುವ ಭಯದಿಂದ ಮುದ್ದೇಬಿಹಾಳಕ್ಕೆ ಮತಕ್ಷೇತ್ರಕ್ಕೆ ಬಂದಿದ್ದಾರೆ’ ಎಂದರು. ಮಾಳಿಂಗರಾಯ ಹೊನಹಳ್ಳಿ, ಬಸವರಾಜ ಧನ್ನೂರ, ಮಲ್ಲಿಕಾರ್ಜುನ ಲಿಂಗದಳ್ಳಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.