ಈಚೆಗೆ ಪಣಜಿಯಲ್ಲಿ ಗೋವಾ ಯುವ ಮಂಚ್ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದ್ದು, ‘ಮಹದಾಯಿ ನೀರನ್ನು ತಿರುಗಿಸುವ ಕರ್ನಾಟಕದ ಯೋಜನೆಯನ್ನು ತಡೆದೇ ತೀರಲು ಪಣತೊಡಲಾಗಿದೆ. ಏಪ್ರಿಲ್ನಲ್ಲಿ ಕಾಲೇಜುಗಳ ಪರೀಕ್ಷೆಗಳು ಮುಗಿದ ಕೂಡಲೇ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿಗೆ ಬರಬೇಕು. ಏಳು ತಾಸು ಸತ್ಯಾಗ್ರಹ ನಡೆಸಬೇಕು’ ಎಂದು ಹೇಳಿದ್ದಾರೆ.