ಕಾರ್ಗಲ್ (ಸಾಗರ ತಾಲ್ಲೂಕು): ಕಳೆದ ಭಾನುವಾರ ಜೋಗ ಜಲಪಾತದ ನೆತ್ತಿ ಪ್ರದೇಶದಿಂದ ಕಣ್ಮರೆಯಾಗಿದ್ದ ಯುವಕನನ್ನು ಹುಡುಕಲು ಕೊರಕಲು ಪ್ರದೇಶಕ್ಕೆ ಇಳಿದಿದ್ದ ಸಾಹಸಿ ಜ್ಯೋತಿರಾಜ್ (ಕೋತಿರಾಜ್) ಅವರು ಬುಧವಾರ ಬೆಳಿಗ್ಗೆ ಪತ್ತೆಯಾಗಿದ್ದಾರೆ.
ಚಿತ್ರದುರ್ಗ ಮತ್ತು ಬೆಂಗಳೂರಿನ ರಕ್ಷಣಾ ತಂಡ (ಒಟ್ಟು 20 ಮಂದಿ ಒಳಗೊಂಡ) ಜ್ಯೋತಿರಾಜ್ಗಾಗಿ ಶೋಧ ಕಾರ್ಯಾಚರಣೆ ನಡೆಸಿತು.
ಈ ತಂಡ ಮೈಸೂರು ಬಂಗಲೆ ಕಡೆಯಿಂದ ಜಲಪಾತದ ಬುಡಕ್ಕೆ ಇಳಿದಿತು. ಬಾಂಬೆ ಬಂಗಲೆಯಿಂದ ಡ್ರೋನ್ ಕ್ಯಾಮೆರಾ ಬಳಸಿ ಸಾಹಸಿ ಚಾರಣಿಗನ ಪತ್ತೆಗೆ ಪ್ರಯತ್ನ ನಡೆಸಲಾಗಿತು.