ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬರುವ ವಿಧಾನಸಭೆ ಚುನಾವಣೆಯಲ್ಲಿ ಜನರು ತೀರ್ಮಾನ ನೀಡಲಿದ್ದಾರೆ. ರಾಜ್ಯದಲ್ಲಿ ನಡೆದ ರೈತರ ಆತ್ಮಹತ್ಯೆಗಳು, ಅತ್ಯಾಚಾರದಲ್ಲಿ ದೇಶಕ್ಕೆ ರಾಜ್ಯ 2ನೇ ಸ್ಥಾನ, ಅತಿಹೆಚ್ಚು ಸಾಲ ಮಾಡಿದ ಸಿಎಂ, ಬೆಂಗಳೂರು ಮಹಾನಗರದಲ್ಲಿ ಹೆಚ್ಚಿದ ಅಪರಾಧಗಳು, ಮರಳು ಮಾಫಿಯಾ ಬಗ್ಗೆ ಜನರು ಗಮನಿಸಿದ್ದಾರೆ ಎಂದರು.