ಜೇವರ್ಗಿ (ಕಲಬುರ್ಗಿ ಜಿಲ್ಲೆ): ಗ್ರಾಮ ದೇವತೆ ಜಾತ್ರೆಯಲ್ಲಿ ನಡೆದಿದ್ದ ಘರ್ಷಣೆಯಿಂದ ಬೇಸತ್ತು ತಮ್ಮ ಮನೆಗಳಲ್ಲಿನ ದೇವರ ಫೋಟೊಗಳನ್ನು ದಹಿಸಿದ್ದ ತಾಲ್ಲೂಕು ಕೊಂಡಗೂಳಿ ಗ್ರಾಮದ ದಲಿತ ಸಮುದಾಯದವರು ಬುಧವಾರ ಹಿಂದೂ ಧರ್ಮ ತ್ಯಜಿಸಿ ಸಾಮೂಹಿಕವಾಗಿ ಬೌದ್ಧ ಧರ್ಮ ಸ್ವೀಕರಿಸಿದರು.
ಬಸವ ಕಲ್ಯಾಣದ ಬೌದ್ಧ ಬಿಕ್ಕು ದಮ್ಮನಾಗ ಹತ್ಯಾಳ, ಬಂತೇಜಿ ಸಂಘಪಾಲ ಅಣದೂರ್ ಅವರ ಮಾರ್ಗದರ್ಶನದಲ್ಲಿ ಗ್ರಾಮದ 58 ಕುಟುಂಬಗಳ ಸುಮಾರು 200 ಸದಸ್ಯರಿಗೆ ದಲಿತ ಮುಖಂಡ ವಿಠಲ್ ದೊಡಮನಿ ಬೌದ್ಧ ಧರ್ಮದ ಪ್ರತಿಜ್ಞಾ ವಿಧಿ ಬೋಧಿಸಿದರು. ಅವರಿಗೆ ಬುದ್ಧನ ಭಾವಚಿತ್ರ ವಿತರಿಸಲಾಯಿತು.
ಗ್ರಾಮ ದೇವತೆ ಮರೆಮ್ಮದೇವಿ ತೇರು ಎಳೆಯುವ ವಿಷಯಕ್ಕೆ ಸಂಬಂಧಿಸಿದಂತೆ ಫೆ.9ರಂದು ದಲಿತರು ಮತ್ತು ಸವರ್ಣಿಯರ ಮಧ್ಯೆ ಮಾರಾಮಾರಿ ನಡೆದಿತ್ತು. ಕಲ್ಲು ತೂರಾಟ ನಡೆದು 8 ಜನ ಗಾಯಗೊಂಡಿದ್ದರು.
ದಲಿತರ ಮೇಲೆ ನಡೆದ ಈ ಹಲ್ಲೆಗೆ ‘ದೇವರು’ಗಳೇ ಕಾರಣ ಎಂದು ಅಲ್ಲಿನ ದಲಿತರು ಆಕ್ರೋಶ ವ್ಯಕದೇವರ ಫೋಟೊಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು.