ಅತ್ಯಾಚಾರ, ದೌರ್ಜನ್ಯ ನಡೆಯದಂತೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಪ್ರಕರಣ ದಾಖಲಾದ ನಿಗದಿತ ಅವಧಿಯ ಒಳಗೆ ತನಿಖೆ, ವಿಚಾರಣೆ ಪೂರ್ಣಗೊಳಿಸಬೇಕು. ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾಮಟ್ಟದಲ್ಲಿ ಹೊಣೆಗಾರಿಕೆ ವಹಿಸಬೇಕು. ಸಂತ್ರಸ್ತರಿಗೆ ನಗದು ರೂಪದಲ್ಲಿ ಪರಿ
ಹಾರ ನೀಡುವ ಜೊತೆಗೆ ಶಿಕ್ಷಣ, ಉದ್ಯೋಗ, ಸ್ವ ಉದ್ಯೋಗಕ್ಕೆ ನೆರವು ನೀಡುವಂತೆಯೂ ಶಿಫಾರಸು ಮಾಡಲಾಗುವುದು ಎಂದು ವಿವರಿಸಿದರು.