ಕಲಾ ತಂಡಗಳ ರಸದೌತಣ: ಜನಪದ ಕಲಾವಾಹಿನಿಯಲ್ಲಿ ರಂಗು, ರಂಗಿನ ಉಡುಪು ತೊಟ್ಟ ಕಲಾವಿದರು ಬೆಳವಡಿ ಗ್ರಾಮದ ತುಂಬ ಹೆಜ್ಜೆ ಹಾಕಿದರು. ಕಲಾ ತಂಡ ನೋಡುಗರಿಗೆ ಕಲಾ ರಸದೌತಣ ಉಣಬಡಿಸಿತು. 20ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. ಗುಂಡೇನಟ್ಟಿ ಜಗ್ಗಲಗಿ ಮೇಳ, ಹಂದಿಗುಂದ ರಾಮದುರ್ಗದ ಡೊಳ್ಳು ಕುಣಿತ, ಶಹಾಪುರದ ಕರಬಲ್ಲ ಕುಣಿತ, ಚಮಕೇರಿ ಕರಡಿ ಮಜಲು, ಕಲ್ಲೊಳ್ಳಿ ವೀರಭದ್ರ ಕುಣಿತ, ಸಂಭಾಳವಾದನ, ಅಳಗವಾಡಿ ಕುದುರೆ ಕುಣಿತ, ಚಿಂಚಲಿ ಡೋಲು ಪಥಕ, ಹಳಿಯಾಳ ತಾಸೇವಾದನ, ಮೊರಬ ಕರಬಲ್ಲ ಕುಣಿತ, ಹಗಲೂ ವೇಷ ಕಲಾ ತಂಡದ ರಾಮ, ರಾಕ್ಷಸ ಪಾತ್ರಧಾರಿ ನೋಡುಗರ ಕಣ್ಮನ ಸೆಳೆದವು. ಸಚಿವ ರಮೇಶ ಜಾರಕಿಹೊಳಿ, ಶಾಸಕರಾದ ಗಣೇಶ ಹುಕ್ಕೇರಿ, ಅಶೋಕ ಪಟ್ಟಣ, ಡಿ.ಬಿ. ಇನಾಮದಾರ, ಸಂಸದ ಸುರೇಶ ಅಂಗಡಿ ಅನುಪಸ್ಥಿತಿ ಎದ್ದು ಕಾಣಿಸಿತು.
ರವಿ ಬಿ. ಹುಲಕುಂದ