ಸಮಾರಂಭದಲ್ಲಿ ಹಿರಿಯ ಪ್ರಕಾಶಕರನ್ನು ಗೌರವಿಸಲಾಗುತ್ತದೆ. ಕಲಬುರ್ಗಿಯ ಅಪ್ಪಾರಾವ್ ಅಕ್ಕೋಣಿ, ಗದಗದ ಜಯದೇವ ಮೆಣಸಗಿ, ಅಥಣಿಯ ಸಿದ್ಧಣ್ಣ ಉತ್ನಾಳ, ಬಳ್ಳಾರಿಯ ಚೆನ್ನಬಸವಣ್ಣ, ಹುಬ್ಬಳ್ಳಿಯ ಹನುಮಾಕ್ಷಿ ಗೋಗಿ, ಉಡುಪಿಯ ಇಂದಿರಾ ಹಾಲಂಬಿ, ಮೈಸೂರಿನ ಶ್ರೀನಿವಾಸ, ಕಾಂತಾವರ ಕನ್ನಡ ಸಂಘದ ನಾ. ಮೊಗಸಾಲೆ, ಬೆಂಗಳೂರಿನ ಡಿ.ಕೆ.ಶ್ಯಾಮಸುಂದರರಾವ್, ಮಂಗಳೂರಿನ ಗೋಪಾಲಕೃಷ್ಣ ಭಟ್ಟ, ಬೆಂಗಳೂರಿನ ಎನ್.ಪಿ. ಪುಟ್ಟಣ್ಣಯ್ಯ, ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜರಾವ್, ಪಲ್ಲವ ವೆಂಕಟೇಶ್, ಜಾಣಗೆರೆ ವೆಂಕಟರಾಮಯ್ಯ, ಉಮೇಶ್ ನಾಗಮಂಗಲ, ಮೈಸೂರಿನ ಲೋಕಪ್ಪ, ಬೆಂಗಳೂರಿನ ಕಾವ್ಯಕಲಾ ಪ್ರಕಾಶನ, ಟಿ.ಎನ್. ಕೃಷ್ಣಯ್ಯಶೆಟ್ಟಿ ಅಂಡ್ ಸನ್ಸ್, ಜನಪದ ಪ್ರಕಾಶನ, ಸಾಗರದ ರವೀಂದ್ರ ಪುಸ್ತಕಾಲಯದ ಮುಖ್ಯಸ್ಥರನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.