ಬೀದರ್: ತೆಲಂಗಾಣ-ಛತ್ತೀಸಗಡ ಗಡಿಯಲ್ಲಿ ನಕ್ಸಲರ ವಿರುದ್ಧ ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧ ಸುಶೀಲಕುಮಾರ ವಿಲ್ಸನ್ ಅವರ ಶವಯಾತ್ರೆ ಇಲ್ಲಿ ನಡೆಯಿತು.
ಬೀದರ್ನ ಲಾಡಗೇರಿ ಗ್ರೇಸ್ಕಾಲೊನಿಯ ನಿವಾಸಿಯಾದ ಯೋಧ ಸುಶೀಲಕುಮಾರ ಅವರು ತೆಲಂಗಾಣ ನಕ್ಸಲ್ ನಿಗ್ರಹ ಪಡೆ ಕಮಾಂಡೊ ಆಗಿ ಕಾರ್ಯನಿರ್ವಹಿಸಿದ್ದರು.
ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಮಂಗಲಪೇಟ್ ಸ್ಮಶಾನಕ್ಕೆ ತರಲಾಗಿದೆ. ಈ ವೇಳೆ ತೆಲಂಗಾಣ ಪೊಲೀಸ್ ಅಧಿಕಾರಿಗಳು ಇದ್ದಾರೆ. ಈ ವೇಳೆ ನೂರಾರು ಜನರು ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.