ಬೆಂಗಳೂರು: ಬಿಬಿಎಂಪಿಯು ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ಇ.ಕೆ.ನಿರಂಜನ್ ಅವರ ಪುತ್ಥಳಿ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆಸಬೇಕಿತ್ತು ಎಂದು ‘ಆರ್ಮಿ ವೆಲ್ಫೇರ್ ಅಂಡ್ ಸಪೋರ್ಟ್ ಫೋರಂ’ (ಎಡಬ್ಲ್ಯುಎಸ್ಎಫ್) ಅಧ್ಯಕ್ಷ ಶಶಾಂಕ್ ಶಿವಶಂಕರ್ ಹೇಳಿದರು.
‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹಾಗೂ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಪ್ರತಿಮೆಗಳ ನಿರ್ಮಾಣಕ್ಕೆ ಪಾಲಿಕೆ ಈ ಸಲದ ಬಜೆಟ್ನಲ್ಲಿ ₹ 2 ಕೋಟಿ ಮೀಸಲಿಟ್ಟಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ, ನಿರಂಜನ್ ಅವರನ್ನು ಸ್ಮರಿಸಿಕೊಳ್ಳದಿರುವುದು ಬೇಸರದ ಸಂಗತಿ’ ಎಂದರು.
‘ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಿರಂಜನ್ ಸ್ಮರಣೆಯ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.