ಹಿರಿಯ ರಾಜಕಾರಣಿಗಳು ಮತ್ತು ಪತ್ರಕರ್ತರು ಭಾಗವಹಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಶ್ವೇತಭವನದಲ್ಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಸೇರಿದಂತೆ ತಮಾಷೆ ಮಾಡುವ ವ್ಯಕ್ತಿಗಳ ಜತೆ ಈ ವಿಷಯದ ಬಗ್ಗೆ ಚರ್ಚಿಸಿದ್ದೇನೆ. ವಾಗ್ದಂಡನೆಗೆ ಗುರಿಪಡಿಸಲಾಯಿತೇ ಎಂದು ಪೆನ್ಸ್ ಪ್ರತಿ ದಿನ ಕೇಳುತ್ತಾರೆ. ಯಾವುದೇ ಅಪರಾಧ ಮಾಡದೇ ಇದ್ದಾಗ ಇಂತಹ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಅದನ್ನು ಕಡೆಗಣಿಸಬೇಕು. ಈ ವಿಷಯದ ಬಗ್ಗೆ ಗಮನ ನೀಡುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.