‘ಮಳಖೇಡ ಪಟ್ಟಣವನ್ನು ಈ ಹಿಂದೆ ಮಾನ್ಯಖೇಟ ಎಂದು ಕರೆಯಲಾಗುತ್ತಿತ್ತು. ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಇತಿಹಾಸ, ಸಂಸ್ಕೃತಿ, ಸಾಹಿತ್ಯದ ಪ್ರಥಮ ಅನ್ವೇಷಣೆ ಇಲ್ಲಿಯೇ ಆಗಿದೆ. ಕವಿರಾಜ ಮಾರ್ಗ ಇಲ್ಲಿ ರಚನೆಯಾಗಿದೆ. ರಾಷ್ಟ್ರಕೂಟರ ಗಡಿ ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದರೆ, ಕನ್ನಡದ ಕಂಪು ವಿಶ್ವದೆಲ್ಲೆಡೆ ಹರಡಿದೆ. ಕನ್ನಡಿಗರು ಎಲ್ಲ ಕಡೆ ಬದುಕುತ್ತಿದ್ದಾರೆ. ಕನ್ನಡಿಗರಿಗೆ ಇಡೀ ವಿಶ್ವವೇ ನೆಲೆಯಾಗಿದೆ. ಇದಕ್ಕೆ ಕಾರಣ ರಾಷ್ಟ್ರಕೂಟ ಸಾಮ್ರಾಜ್ಯ. ಆದ್ದರಿಂದ ಮುಂದಿನ ಪೀಳಿಗೆಗೆ ರಾಷ್ಟ್ರಕೂಟ ಗತವೈಭವ ಪರಿಚಯಿಸಬೇಕಿದೆ’ ಎಂದು ಅವರು ಹೇಳಿದರು.