ಹೊನ್ನಾವರ (ಉತ್ತರ ಕನ್ನಡ): ‘ರಾಜ್ಯದಲ್ಲಿ ಹಿಂದೂಗಳಿಗೆ ಮಾತ್ರ ಸರ್ಕಾರ ಭದ್ರತೆ ಒದಗಿಸುತ್ತಿಲ್ಲ. ಪರೇಶ ಮೇಸ್ತ ಮತ್ತು ಇತರ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಗೌರಿ ಸಂತಾನ ಏಕೆ ದನಿ ಎತ್ತಲಿಲ್ಲ? ಮುಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಎಡಬಿಡಂಗಿ ಬುದ್ಧಿಜೀವಿಗಳು ಪ್ರಶಸ್ತಿಪತ್ರ ಹಾಗೂ ಹಣ ವಾಪಸ್ ಮಾಡಲು ಸಿದ್ಧರಾಗಿರಿ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಲೇವಡಿ ಮಾಡಿದರು.