ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀವರ್ಮ ಅಜ್ರಿ.ಎಂ, ‘ನಮ್ಮ ಯುವ ಜನತೆ ವೇಗವಾಗಿ ನಕಾರಾತ್ಮಕ ವಿಷಯಗಳ ಕಡೆ ಆಕರ್ಷಿತರಾಗುವುದು ಹೆಚ್ಚು. ಪ್ರತಿಯಾಗಿ ಉತ್ತಮ ಆಲೋಚನೆಗಳನ್ನು ಬೆಳೆಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳು ಕಾಲೇಜಿನ ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಸರ್ಕಾರದ ಕಾನೂನಿನ ಪ್ರಕಾರ ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯಕ್ಕೆ ಹಾನಿಕರ ಎಂದು ನಮೂದಾಗಿರುತ್ತದೆ. ಆದರೆ, ಉಪಯೋಗಿಸುವವರು ಅದರ ಬಗ್ಗೆ ಗಮನ ನೀಡುವುದಿಲ್ಲ. ನಮ್ಮ ಯುವ ಜನತೆ ಈ ಕುರಿತು ತಿಳಿದಿರಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು’ ಎಂದರು.