ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ ಧರಣಿ ಆರಂಭವಾಗಿತ್ತು. ಡಿವೈಎಫ್ಐ ಮುಖಂಡರು ಮತ್ತು ಸುರತ್ಕಲ್ ಮಾರುಕಟ್ಟೆಯ ಹಲವು ವ್ಯಾಪಾರಿಗಳು ಧರಣಿಯಲ್ಲಿ ಭಾಗಿಯಾಗಿದ್ದಾರೆ. ಭಾನುವಾರ ರಾತ್ರಿಯೂ ಧರಣಿ ಮುಂದುವರಿದಿದೆ. ಮುನೀರ್ ಅವರೊಂದಿಗೆ ಡಿವೈಎಫ್ಐ ಮುಖಂಡ ಬಿ.ಕೆ.ಇಮ್ತಿಯಾಝ್, ವ್ಯಾಪಾರಿಗಳಾದ ದೀಕ್ಷಿತ್ ಶೆಟ್ಟಿ, ಯಾದವ ಶೆಟ್ಟಿಗಾರ್, ಎಂ.ಡಿ.ಇಸ್ಮಾಯಿಲ್, ಅಶ್ರಫ್, ಅಜ್ಮಲ್ ಸೇರಿದಂತೆ ಹಲವರು ಭಾನುವಾರ ಧರಣಿಯಲ್ಲಿ ಭಾಗಿಯಾಗಿದ್ದಾರೆ.