ಬೆಂಗಳೂರು: ನಗರದಲ್ಲಿನ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಆಕ್ಷಾಂಕೆಯಿಂದಾಗಿ ಬಿಜೆಪಿ ತನ್ನ ಚುನಾವಣಾ ಪ್ರಚಾರವನ್ನು ಪ್ರತಿದಿನ ಪ್ರಬಲಗೊಳಿಸುತ್ತಿದೆ. ಅದಕ್ಕಾಗಿ ‘ಬೆಂಗಳೂರು ರಕ್ಷಿಸಿ’ ಅಭಿಯಾನ ಹಮ್ಮಿಕೊಂಡಿದ್ದಲ್ಲದೆ. ‘ಕಾಂಗ್ರೆಸ್ ಅಧಿಕಾರಕ್ಕೆ ಬರುವ ನೀಡಿದ ಭರವಸೆ ಏನು, ಐದು ವರ್ಷಗಳ ಬಳಿಕ ನಗರದ ವಾಸ್ತವ ಸ್ಥಿತಿ ಏನಿದೆ’ ಎಂಬುದರ ಕುರಿತು ಟ್ವೀಟ್ಗಳನ್ನು ಮಾಡಿದೆ.