ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹರಪನಹಳ್ಳಿಯನ್ನು ಆಳಿದ ಪಾಳೆಗಾರ ಒಂದನೇ ಸೋಮಶೇಖರ ನಾಯಕ, ಈಗ ತುಂಗಭದ್ರ ಜಲಾಶಯದಲ್ಲಿ ಮುಳುಗಡೆಯಾಗಿರುವ ನಾರಾಯಣದೇವರ ಕೆರೆಯನ್ನು (ಹೊಸಪೇಟೆ ತಾಲ್ಲೂಕು) ತನ್ನ ಎರಡನೇ ರಾಜಧಾನಿ ಮಾಡಿಕೊಂಡಿದ್ದ ಎಂಬ ಅಂಶ ಶಾಸನದಲ್ಲಿ ಉಲ್ಲೇಖವಾಗಿದೆ. ಹೀಗಾಗಿ ನೂರಾರು ವರ್ಷಗಳಿಂದ ಹರಪನಹಳ್ಳಿ ತಾಲ್ಲೂಕು ವಿಜಯನಗರ ಪ್ರದೇಶದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಅದನ್ನು ಪುನಃ ಬೆಸೆಯುವ ಪ್ರಯತ್ನ ಸರಿಯಾದ ನಡೆ.