ದಾವಣಗೆರೆಯಲ್ಲಿ ಸೋಮವಾರ ಪ್ರಾರಂಭವಾದ ಎರಡು ದಿನಗಳ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಭಾಷಣ ಮಾಡಿದ ಅವರು, ‘ತಾನು ಮಾದಾರ ಚನ್ನಯ್ಯನ ಮನೆಯ ಮಗ ಎಂದು ಬಸವಣ್ಣ 47 ಸಲ ಹೇಳಿಕೊಂಡಿದ್ದು, ಅದು ನಿಜವಾದ ಬಸವಮಾರ್ಗ. ಕುದುರೆ ಮೇಲೆ ಕೂರಿಸಿರುವ ಬಸವಮಾರ್ಗ ಕೂಡ ಸರಿಯಾದುದಲ್ಲ. ನಿಜವಾದ ಬಸವಮಾರ್ಗದ ಎದುರು ವೀರಶೈವ, ಲಿಂಗಾಯತ ಚರ್ಚೆ ಅಪ್ರಸ್ತುತ. ಲಾಭದ ಮಾರ್ಗವಾಗಿ ಅದನ್ನು ಬದಲಿಸಲು ಕೆಲವರು ಯತ್ನಿಸುತ್ತಿದ್ದಾರೆ’ ಎಂದು ವಿಶ್ಲೇಷಿಸಿದರು.