ಚಿಂತಕ ಕೆ.ರಾಜ್ಕುಮಾರ್ ಮಾತನಾಡಿ, ‘80ರ ದಶಕದಲ್ಲಿ ಕನ್ನಡಪರ ಹೋರಾಟಗಾರರು ಚಳವಳಿಗಾಗಿಯೇ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಆದರೆ, ಇಂದು ಕನ್ನಡಪರ ಹೋರಾಟ ಎನ್ನುವುದು ಕೆಲವರಿಗೆ ಒಂದು ರೀತಿಯ ದಂಧೆ, ವ್ಯವಹಾರವಾಗಿದೆ. 2–3 ದಶಕಗಳ ಹಿಂದೆ ಕನ್ನಡದ ಜನತೆ ಬೌದ್ಧಿಕ ವಿಚಾರಗಳಿಗೆ ತುಡಿಯುತ್ತಿದ್ದರು. ಆದರೆ, ಈಗಿನವರು ಭೌತಿಕ ಲೋಲುಪತೆಗೆ ಒಳಗಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.