ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅನಿಲ ಚಿಂತಾಮಣಿ, ಸಹಾಯಕ ಆಡಳಿತ ಅಧಿಕಾರಿ ಅಬ್ದುಲ್ ಸಲೀಂ, ಅರೋಗ್ಯ ಮೇಲ್ವಿಚಾರಕ ಮಲ್ಲಿಕಾರ್ಜುನ, ವಲಯ ಕೀಟ ಶಾಸ್ತ್ರಜ್ಞೆ ಗಂಗೋತ್ರಿ ಹಾಗೂ ಚಾಲಕ ನಂದಕುಮಾರ ರೆಡ್ಡಿ ಊಟ ಮಾಡುತ್ತಿದ್ದರು. ನಂದಕುಮಾರ ರೆಡ್ಡಿ ಇನ್ನೇನು ತುತ್ತು ಬಾಯಿಗೆ ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ಜಿರಲೆ ಕಂಡು ಬಂದಿತು. ತಕ್ಷಣ ಹೋಟೆಲ್ ಸಿಬ್ಬಂದಿಯನ್ನು ಕರೆದು ತರಾಟೆಗೆ ತೆಗೆದುಕೊಂಡರು.