ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನ ವಿವಿಧ ಇಲಾಖೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ತೇಜ್‌ರಾಜ್‌

Last Updated 7 ಮಾರ್ಚ್ 2018, 12:10 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತರಿಗೆ ಚಾಕುವಿನಿಂದ ಇರಿದ ಆರೋಪಿ ತೇಜ್‌ರಾಜ್‌ ತಿಪಟೂರು ಮೂಲದವ ಎಂದು ತಿಳಿದು ಬಂದಿದೆ. ‌

ಟೆಂಡರ್ ಪ್ರಕ್ರಿಯೆ ವಿಚಾರದಲ್ಲಿ ತುಮಕೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯೆಟ್‌)ಯ ಕ್ಲರ್ಕ್‌ ಗಿರಿಜಾ ಹಾಗೂ ಇಂಜಿನಿಯರ್‌ ಉಮೇಶ್‌ ವಿರುದ್ಧ 2017ರ ಮೇ 17ರಂದು ನೇರವಾಗಿ ಲೋಕಾಯುಕ್ತಕ್ಕೆ ತೇಜ್‌ರಾಜ್‌ ದೂರು ಸಲ್ಲಿಸಿದ್ದ. ಕರ್ತವ್ಯ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರ ಆರೋಪ ಲೋಕಾಯುಕ್ತ ದೂರು ದಾಖಲಿಸಿಕೊಂಡಿತ್ತು.

</p><p>ಇದರೊಂದಿಗೆ ತುಮಕೂರಿನ ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ತೇಜ್‌ರಾಜ್‌ 2017ರ ಮಾರ್ಚ್‌ 27ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.</p><p>ದೂರಿನ ಬಗ್ಗೆ ವಿಚಾರಣೆ ಮುಕ್ತಾಯ ಆಗಿತ್ತು. ಸರ್ಕಾರಿ ಅಧಿಕಾರಿಗಳದ್ದು ತಪ್ಪಿಲ್ಲ ಎನ್ನುವುದು ವಿಚಾರಣೆಯಿಂದ ಗೊತ್ತಾಗಿತ್ತು. ಅದನ್ನು ಪ್ರಶ್ನೆ ಮಾಡಲು ಮತ್ತು  ತನಗೆ ಅನ್ಯಾಯ ಆಗಿದೆ ಎಂದು ಬುಧವಾರ ಲೋಕಾಯುಕ್ತ ಅಧಿಕಾರಿಗಳೊಂದಿಗೆ  ತೇಜ್‌ರಾಜ್‌ ವಾಗ್ವಾದ ನಡೆಸಿದ್ದು, ಇದೇ ವೇಳೆ ಲೋಕಾಯುಕ್ತ ನ್ಯಾಯಮೂರ್ತಿಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.</p><p>ಇದು ಪೂರ್ವ ಯೋಜಿತ ಕೃತ್ಯ. ಕೊಲೆ ಮಾಡುವ ಉದ್ದೇಶದಿಂದಲೇ ತೇಜ್‌ರಾಜ್‌ ಬಂದಿದ್ದಾನೆ. ತನಿಖೆ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.</p><p>ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಕೆ.ಜೆ.ಜಾರ್ಜ್, ಎಚ್.ಎಂ‌.ರೇವಣ್ಣ, ಬಸವರಾಜರಾಯರೆಡ್ಡಿ, ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ನ್ಯಾ.ವಿಶ್ವನಾಥ ಶೆಟ್ಟಿ ಅವರ ಆರೋಗ್ಯ ವಿಚಾರಿಸಿದರು. ವಿಶ್ವನಾಥ ಶೆಟ್ಟಿ ಅವರ ಪತ್ನಿ ಮತ್ತು ಸಂಬಂಧಿಕರು ಈಗ ಆಸ್ಪತ್ರೆಗೆ ಬಂದಿದ್ದಾರೆ.</p><p><img alt="" src="https://cms.prajavani.net/sites/pv/files/article_images/2018/03/07/comp-1.jpg" style="width: 600px; height: 375px;" data-original="/http://www.prajavani.net//sites/default/files/images/comp-1.jpg"/></p><p><em>(ಎಂಟು ಅಧಿಕಾರಿಗಳ ವಿರುದ್ಧ ನೀಡಿದ್ದ ದೂರನ್ನು ಲೋಕಾಯುಕ್ತರು ಮುಕ್ತಾಯಗೊಳಿಸಿದ್ದರು)</em></p><p><img alt="" src="https://cms.prajavani.net/sites/pv/files/article_images/2018/03/07/comp-2.jpg" style="width: 600px; height: 681px;" data-original="/http://www.prajavani.net//sites/default/files/images/comp-2.jpg"/></p><p><strong>ಇನ್ನಷ್ಟು:</strong> <a href="http://www.prajavani.net/news/article/2018/03/07/558082.html" target="_blank">ಲೋಕಾಯುಕ್ತರಿಗೆ ಚಾಕು ಇರಿತ: ಲೋಕಾಯುಕ್ತ ಕಚೇರಿಯಲ್ಲಿಯೇ ಘಟನೆ</a></p><p><a href="http://www.prajavani.net/news/article/2018/03/07/558103.html" target="_blank">ಲೋಕಾಯುಕ್ತರಿಗೆ ಚೂರಿ ಇರಿತ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ</a></p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT