ಸಮಾನತೆಯ ಸಂದೇಶವನ್ನು ಪ್ರಪಂಚಕ್ಕೆ ಸಾರಿದ್ದ ವ್ಲಾಡಿಮಿರ್ ಲೆನಿನ್ ಅವರು ಕಮ್ಯುನಿಸ್ಟ್ ಪಕ್ಷಕ್ಕೆ ಸೀಮಿತಗೊಂಡಿದ್ದ ವ್ಯಕ್ತಿಯಲ್ಲ. ಅವರದ್ದು ಮಾರ್ಕ್ಸ್ವಾದಿ ಪಂಥ. ಆದ್ದರಿಂದ ಕಮ್ಯುನಿಸ್ಟ್ ಪಕ್ಷಕ್ಕೆ ಅವರು ಆರಾಧ್ಯ ದೈವ. ತ್ರಿಪುರಾವನ್ನು 25 ವರ್ಷ ಆಳಿದ ಕಮ್ಯುನಿಸ್ಟ್ ಪಕ್ಷವು ಅವರ ಪ್ರತಿಮೆಗಳ ಸ್ಥಾಪನೆಗೆ ಇಂಬು ಕೊಟ್ಟಿದ್ದು ಕೂಡ ಸಹಜವೇ. ಆದರೆ ಆ ಪಕ್ಷ ಅಧಿಕಾರ ಕಳೆದುಕೊಂಡ ತಕ್ಷಣ, ಜಗದ್ವಂದ್ಯ ದಾರ್ಶನಿಕನನ್ನು ‘ವಿದೇಶಿಗ’ ಎಂದು ಜರಿದು, ಆತನ ಪ್ರತಿಮೆಗಳನ್ನು ಕೆಡವುವುದು ಏನನ್ನು ಸೂಚಿಸುತ್ತದೆ? ವಿದೇಶಗಳಲ್ಲಿರುವ ನಮ್ಮ ಮಹಾತ್ಮನ ಪ್ರತಿಮೆಗಳಿಗೂ ಇದೇ ಗತಿ ಒದಗಿಬಂದರೆ ಯಾರನ್ನು ದೂಷಿಸೋಣ?