ಹಾಸನ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರಿಯ ಆಡಳಿತ ನ್ಯಾಯ ಮಂಡಳಿ(ಸಿಎಟಿ) ತಡೆಹಿಡಿದಿದೆ.
ಅವಧಿಗೂ ಮುನ್ನ ವರ್ಗಾವಣೆ ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಕೇಂದ್ರಿಯ ಆಡಳಿತ ನ್ಯಾಯ ಮಂಡಳಿ(ಸಿಎಟಿ) ಮೊರೆ ಹೋಗಿದ್ದರು. ವರ್ಗಾವಣೆ ಆದೇಶಕ್ಕೆ ಸಿಎಟಿ ಮಾರ್ಚ್ 13ರ ವರೆಗೆ ತಡೆ ನೀಡಿದೆ.
ಸಿಎಟಿ ನೀಡಿರುವ ತಡೆ ಆದೇಶದಿಂದ ಸರ್ಕಾರಕ್ಕೆ ಮತ್ತೆ ಮುಖಭಂಗ ಆದಂತಾಗಿದೆ. ಮಾ.13ಕ್ಕೆ ಆದೇಶದ ಕುರಿತು ವಿಚಾರಣೆ ನಿಗದಿಯಾಗಿದ್ದು, ಆವರೆಗೂ ರೋಹಿಣಿ ಅವರು ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಯಲಿದ್ದಾರೆ.
ಈ ಸಂಬಂಧ ಮಾ.12ರ ಒಳಗೆ ಪ್ರತಿಕ್ರಿಯೆ ನೀಡುವುದಾಗಿ ರಾಜ್ಯ ಸರ್ಕಾರ ಸಿಎಟಿಗೆ ಹೇಳಿದೆ.