‘ಪಕ್ಷದ ಕಚೇರಿಯಲ್ಲಿ ತಯಾರಿಸುವ ಆಹಾರವನ್ನು ಸರ್ಕಾರ್ ಸೇವಿಸಲಿದ್ದಾರೆ. ಈಗಾಗಲೇ ಅವರು, ಕಚೇರಿಗೆ ಪುಸ್ತಕ, ಬಟ್ಟೆ ಹಾಗೂ ಕೆಲವು ಸಿಡಿಗಳನ್ನು ಕಳುಹಿಸಿದ್ದಾರೆ. ಹೊಸ ಸರ್ಕಾರದಿಂದ ವಸತಿಗೃಹ ದೊರೆತರೆ ಮತ್ತೆ ಅವರು ವಾಸಸ್ಥಳ ಬದಲಾಯಿಸಬಹುದು’ ಎಂದು ಪಕ್ಷದ ಕಚೇರಿ ಕಾರ್ಯದರ್ಶಿ ಹರಿಪದಾ ದಾಸ್ ಹೇಳಿದರು. ‘ಮಾರ್ಕ್ಸಿಸ್ಟ್ ಸಾಹಿತ್ಯ ಮತ್ತು ಪುಸ್ತಕಗಳನ್ನು ಪಕ್ಷದ ಕಚೇರಿ ಗ್ರಂಥಾಲಯ ಮತ್ತು ಬೀರಚಂದ್ರ ಕೇಂದ್ರ ಗ್ರಂಥಾಲಯಕ್ಕೆ ದೇಣಿಗೆ ನೀಡುತ್ತೇವೆ’ ಎಂದು ಸರ್ಕಾರ್ ಪತ್ನಿ ತಿಳಿಸಿದ್ದಾರೆ.