ಈ ಅವಘಡದಿಂದ ನೊವಾಪೆನ್ , ಯುನಿಮ್ಯಾಕ್ಸ್, ಪ್ರಚಿ, ಆರತಿ ಡ್ರಗ್ಸ್, ಭಾರತ್ ರಸಾಯನ್ , ದರ್ಬಾರ್ ಕಾರ್ಖಾನೆಗಳು ಹಾನಿಗೊಳಗಾಗಿವೆ. ಇದೀಗ ಬೆಂಕಿ ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. ಆದರೆ ಕೆಲವು ಪ್ರದೇಶಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿವೆ. ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪಲ್ಗಾರ್ ಎಸ್ಪಿ ಮಂಜುನಾಥ್ ಸಿಂಘೆ ಹೇಳಿದ್ದಾರೆ.