‘ಅನೈತಿಕ ಚುನಾವಣೆಗಳನ್ನು ನಡೆಸುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಹಣಕೊಟ್ಟು ಕೊಂಡುಕೊಂಡಿದ್ದರು. ಅವರ ಬಳಿ ಕಳ್ಳ ಮಾರ್ಗದಲ್ಲಿ ಬಂದಿರುವ ಹಣ ಸಾಕಷ್ಟಿದೆ. ಈಗಲೂ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ; ಕೇರಳಕ್ಕೆ ಮರಳು ರವಾನೆಯಾಗುತ್ತಿದೆ. ಆ ಹಣದಿಂದ ಜನರನ್ನು ಕೊಂಡುಕೊಳ್ಳುವ ಭ್ರಮೆಯಲ್ಲಿದ್ದಾರೆ. ಅದೇನು ಅವರ ದುಡ್ಡಲ್ಲ; ನಿಮ್ಮ ಹಣವೇ. ಹಣ ತೆಗೆದುಕೊಳ್ಳಿ ತಪ್ಪೇನಿಲ್ಲ. ಮತದಾನ ಮಾಡುವಾಗ ಜಾಗ್ರತೆಯಿರಲಿ’ ಎಂದರು.