‘ಕನ್ನಡ ನಾಡಿಗೆ ಧ್ವಜ ಮಾಡಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ತರಾತುರಿ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಸಭೆಗೆ ಹೋಗಿದ್ದ ಸಾಹಿತಿಗಳು ಮುಖ್ಯಮಂತ್ರಿ ಮಾತು ಕೇಳಿಕೊಂಡು ಬಂದಿದ್ದಾರೆ. ಎಲ್ಲದಕ್ಕೂ ಕೋಲೆ ಬಸವನಂತೆ ತಲೆಯಾಡಿಸುವ ಈ ಸಾಹಿತಿಗಳು ಎಂದೂ ಕನ್ನಡಿಗರ ಪರವಾಗಿ ಬೀದಿಗಿಳಿದಿಲ್ಲ. ಯಾವುದೇ ಪಕ್ಷದ ಮುಖ್ಯಮಂತ್ರಿ ಇದ್ದರೂ ಇವರ ಕೆಲಸ ಇಷ್ಟೆ’ ಎಂದು ಲೇವಡಿ ಮಾಡಿದರು.