‘ಸ್ಥಳೀಯ ಶಾಂತಿನಿಕೇತನ ಶಾಲೆ ಬಳಿ ಸಂಗ್ರಹಿಸಿದ್ದ 182 ಕ್ಯುಬೆಕ್ ಮೀಟರ್ ಮರಳು, 73 ಕ್ಯುಬೆಕ್ ಮೀಟರ್ ಜೆಲ್ಲಿಕಲ್ಲು, ಸೋಮೇಶ್ವರ ದೇವಸ್ಥಾನ ಬಳಿ ಇದ್ದ 90 ಕ್ಯುಬೆಕ್ ಮೀಟರ್ ಮರಳು, 110 ಕೆ.ವಿ. ವಿದ್ಯುತ್ ಸರಬರಾಜು ಕೇಂದ್ರದ ಹಿಂಭಾಗದಲ್ಲಿದ್ದ 213 ಕ್ಯುಬೆಕ್ ಮೀಟರ್ ಮರಳು ಮತ್ತು ಸಣಾಪುರ ಕಾಲುವೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಸಂಗ್ರಹಿಸಿದ್ದ 95 ಕ್ಯುಬೆಕ್ ಮೀಟರ್ ಜೆಲ್ಲಿಕಲ್ಲು, 12 ಕ್ಯುಬೆಕ್ ಮೀಟರ್ ಮರಳು ಹಾಗೂ ಜೆ.ಸಿ.ಬಿ. ಯಂತ್ರವನ್ನು ದಾಳಿ ವೇಳೆ ವಶಕ್ಕೆ ಪಡೆಯಲಾಗಿದೆ’ ಎಂದು ತಹಶೀಲ್ದಾರ್ ಬಿ. ರವೀಂದ್ರಕುಮಾರ್ ತಿಳಿಸಿದರು.