ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ, ಪ್ರಮುಖರಾದ ಸದಾನಂದ ಭಟ್ಟ, ರಾಘವೇಂದ್ರ ಭಟ್ಟ, ರೇಖಾ ಹೆಗಡೆ, ಶ್ರುತಿ ಹೆಗಡೆ, ರೂಪಾ ಬೂರ್ಮನೆ, ರಮೇಶ ನಾಯ್ಕ, ಕೃಷ್ಣ ಎಸಳೆ, ವಿ.ಎಸ್. ಪಾಟೀಲ, ಎಲ್.ಟಿ. ಪಾಟೀಲ, ಬಸವರಾಜ ಓಶಿಮಠ, ಉಮೇಶ ಭಾಗ್ವತ, ಗಣೇಶ ಸಣ್ಣಲಿಂಗಣ್ಣವರ್, ಗಣೇಶ ರಾವ್, ಸಿ.ಪಿ. ಪಾಟೀಲ ಉಪಸ್ಥಿತರಿದ್ದರು. ಯಲ್ಲಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸ್ವಾಗತಿಸಿದರು. ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ನರಸಿಂಹ ಕೋಣೆಮನೆ, ಮುಂಡಗೋಡ ತಾಲ್ಲೂಕು ಘಟಕದ ಆಧ್ಯಕ್ಷ ಗುಡ್ಡಪ್ಪ ಕಾತೂರ ನಿರೂಪಿಸಿದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 227 ಬೂತ್ಗಳು ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಿದ್ದರು.
***
ಕಾರ್ಯಕರ್ತರ ವಿಶ್ವಾಸವೇ ಪಕ್ಷದ ಗೆಲುವಿಗೆ ಅಡಿಪಾಯ. ವಿರೋಧಿಗಳು ಮತ್ತೆ ಮೇಲೇಳದಂತೆ ಮಾಡುವ ಐತಿಹಾಸಿಕ ಗೆಲುವು ನಮ್ಮದಾಗಬೇಕು.
– ಅನಂತಕುಮಾರ ಹೆಗಡೆ, ಕೇಂದ್ರ ಸಚಿವ