ನವದೆಹಲಿ: ತೆಲುಗುದೇಶಂ ಪಕ್ಷದ (ಟಿಡಿಪಿ) ಅಶೋಕ್ ಗಜಪತಿ ರಾಜು ಅವರ ರಾಜೀನಾಮೆಯಿಂದ ತೆರವಾಗಿರುವ ನಾಗರಿಕ ವಿಮಾನಯಾನ ಖಾತೆಯ ಹೊಣೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ.
‘ಪ್ರಧಾನಿಯವರ ಸಲಹೆ ಮೇರೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಂಪುಟ ಸಚಿವ ಸುರೇಶ್ ಪ್ರಭು ಅವರಿಗೆ ನಾಗರಿಕ ವಿಮಾನಯಾನ ಖಾತೆಯ ಹೆಚ್ಚುವರಿ ಹೊಣೆ ವಹಿಸಿದ್ದಾರೆ’ ಎಂದು ರಾಷ್ಟ್ರಪತಿಗಳ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
As advised by the Prime Minister, #PresidentKovind has directed that Shri Suresh Prabhu, Cabinet Minister, shall be assigned charge of the Union Ministry of Civil Aviation, in addition to his existing portfolio