ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ 26ನೇ ನುಡಿಹಬ್ಬಕ್ಕೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಶನಿವಾರ ಸಂಜೆ ಇಲ್ಲಿ ಚಾಲನೆ ನೀಡಿದರು.
ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ ಅವರಿಗೆ ಅವರ ಗೈರುಹಾಜರಿಯಲ್ಲಿ ರಾಯರಡ್ಡಿ ಅವರು ನಾಡೋಜ ಗೌರವ ಪ್ರದಾನ ಮಾಡಿದರು. ನಂತರ ಪಿಎಚ್.ಡಿ. ಪದವಿ ಪ್ರಮಾಣ ಪತ್ರ ವಿತರಿಸಿದರು.
ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮೀನಾ ಚಂದಾವರಕರ ಅವರು ಘಟಿಕೋತ್ಸವ ಭಾಷಣ ಮಾಡಿ, ಕನ್ನಡದ ಸಾಹಿತಿಗಳಿಗೆ ಇದುವರೆಗೆ ನೊಬೆಲ್ ಪ್ರಶಸ್ತಿ ಸಿಕ್ಕಿಲ್ಲ. ಜತೆಗೆ ಮಹಿಳಾ ಲೇಖಕಿಯರಿಗೆ ಜ್ಞಾನಪೀಠ ಸಿಕ್ಕಿಲ್ಲ. ಸೃಜನೇತರ ಬರಹಗಳು ಅನ್ಯಭಾಷೆಗೆ ತರ್ಜುಮೆಯಾದಾಗ ಅದು ಸಾಧ್ಯವಾಗಬಹುದು ಎಂದು ಹೇಳಿದರು.
ಕುಲಪತಿ ಪ್ರೊ.ಮಲ್ಲಿಕಾ ಎಸ್.ಘಂಟಿ, ಕುಲಸಚಿವ ಡಿ.ಪಾಂಡುರಂಗಬಾಬು ಇದ್ದರು. ರಾಜ್ಯಪಲ ವಜುಭಾಯಿ ವಾಲಾ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಪಂಡಿತ್ ತಾರಾನಾಥ ಅವರು ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.