‘ಚುನಾವಣೆ ಮತ್ತು ರಾಜಕೀಯ ಸುಧಾರಣೆಗಳು’ ವಿಷಯ ಕುರಿತು ಐಐಎಂನಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಹಣ ಮತ್ತು ತೋಳ್ಬಲ’ ಗೋಷ್ಠಿಯಲ್ಲಿ ಮಾತನಾಡಿದ ಕಾಳಪ್ಪ, ಇವಿಎಂ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದಾಗ, ಸಭಿಕರು ತರಾಟೆಗೆ ತೆಗೆದುಕೊಂಡರು. ‘ಈಗ ನೀವು ಮಾತನಾಡಬೇಕಾಗಿರುವುದು ಹಣಬಲ ಮತ್ತು ತೋಳ್ಬಲ ರಾಜಕೀಯದ ಬಗ್ಗೆ. ವಿಷಯಾಂತರ ಮಾಡಬೇಡಿ’ ಎಂದರು.