‘ಹಿಂದೂ ಯುವಸೇನೆ ಎಂಬ ಸಂಘಟನೆ ಕಟ್ಟಿದ್ದ ಆರೋಪಿ, ದೇಶದ ಹಲವೆಡೆ ನಡೆಯುತ್ತಿದ್ದ ಧರ್ಮಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದ. ಕರ್ನಾಟಕದಲ್ಲೂ ಆತನ ಮುಂದಾಳತ್ವದಲ್ಲಿ ಧರ್ಮಸಭೆಗಳು ನಡೆಯುತ್ತಿದ್ದವು. ಅದಕ್ಕೆ ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶಗಳ ರಾಜ್ಯಗಳ ಯುವಕರು ಬಂದು ಹೋಗುತ್ತಿದ್ದರು. ಅವರು ಯಾರು ಎಂಬ ಬಗ್ಗೆ ನವೀನ್ ಬಾಯ್ಬಿಡುತ್ತಿಲ್ಲ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.