ಆ ಮೂಲಕ ಕನ್ನಡಿಗರಿಗೆ ಹೆಗಡೆ ಅವರ ಮೇಲೆ ದ್ವೇಷ ಹುಟ್ಟಿಸಲು ಪ್ರಯತ್ನಿಸಲಾಗಿದೆ. ಸಚಿವರು ಎಲ್ಲಿಯೂ, ಕೆಂಪೇಗೌಡರ ಬಗ್ಗೆ ಮಾತನಾಡಿಲ್ಲ. ಇದಕ್ಕೆ ಸಂಬಂಧಿಸಿ, ಮಂಜು ಪವರ್ಸ್ಟಾರ್ ಎಂಬುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ‘ಅನಂತಕುಮಾರ ಹೆಗಡೆಯವರು ಬೆಂಗಳೂರಿಗೆ ಬರುವಂತಿಲ್ಲ’ ಎಂದು ಬೆದರಿಕೆ ಹಾಕಿದ್ದಾರೆ. ಈ ಎಲ್ಲ ಪೋಸ್ಟ್ಗಳ ಹಿಂದೆ ಇರುವ ಕಾಣದ ಕೈಗಳನ್ನು ಗುರುತಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಲಾಗಿದೆ.