‘ಸ್ವಾತಂತ್ರ್ಯ ಹೋರಾಟದ ಪಯಣಕ್ಕೆ ಜೊತೆಯಾಗುತ್ತೇವೆ ಎನ್ನುವವರನ್ನು ಸಂತೋಷದಿಂದ ಕರೆದುಕೊಂಡು ಹೋಗುತ್ತೇವೆ. ಇಲ್ಲ ಎನ್ನುವವರನ್ನು ಬಿಟ್ಟು ಸಾಗುತ್ತೇವೆ. ನಮ್ಮ ದಾರಿಗೇನಾದರೂ ಅಡ್ಡವಾದರೆ ಅವರ ತಲೆಮೇಲೆ ಕಾಲಿಟ್ಟು ಮುಂದೆ ಸಾಗುತ್ತೇವೆ ಎಂದು ವೀರ ಸಾವರ್ಕರ್ ಹೇಳುತ್ತಿದ್ದರು. ಆದರೆ, ಈಗ ಹಾಗೆ ಹೇಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಬಂದಿದೆ. ಜೊತೆಗೆ ಬಾರದವರನ್ನು ಬಿಟ್ಟು ಹೋಗುವುದಿಲ್ಲ, ಎಳೆದುಕೊಂಡೇ ಹೋಗುತ್ತೇವೆ’ ಎಂದು ಹೇಳಿದರು.