‘ನಮ್ಮ ಮೆಟ್ರೊ ಸೇವೆ ಸ್ಥಗಿತಗೊಳಿಸಿ ಇದೇ ಮಾರ್ಚ್ 22ರಿಂದಮುಷ್ಕರ ನಡೆಸುವುದಾಗಿ ಮಾ. 7ರಂದು ನೋಟಿಸ್ ನೀಡಿದ್ದೆವು. ಅಲ್ಲಿಯವರೆಗೆ ಕಪ್ಪು ಬ್ಯಾಡ್ಜ್
ಧರಿಸಿ ಪ್ರತಿಭಟನೆ ನಡೆಸುವ ಬಗ್ಗೆಯೂ ಮಾಹಿತಿ ನೀಡಿದ್ದೆವು. ಕಪ್ಪು ಬ್ಯಾಡ್ಜ್ ಧರಿಸದಂತೆ ನಿಗಮದ ಬೈಯಪ್ಪನಹಳ್ಳಿ ಹಾಗೂ ಪೀಣ್ಯದ ಸಿಬ್ಬಂದಿ ನಿಯಂತ್ರಣ ಘಟಕದಲ್ಲಿ ಅಧಿಕಾರಿಗಳು ರೈಲು ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ’ ಎಂದು ಸಂಘದ ಉಪಾಧ್ಯಕ್ಷ ಎಸ್.ಮಂಜುನಾಥ್ ತಿಳಿಸಿದರು.