ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಬೆಂಬಲಿತರ ನಡುವೆ ಜಿದ್ದಾ ಜಿದ್ದಿ ಇತ್ತು. 17 ಸದಸ್ಯರು ಇದ್ದು ಚುನಾವಣೆಯಲ್ಲಿ 15 ಮಂದಿ ಹಾಜರಿದ್ದರು. ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ನರಸಮ್ಮ ಅವರಿಗೆ 7 ಮತ್ತು ಮಹದೇವಪ್ಪ ಅವರಿಗೆ 8 ಸದಸ್ಯರು ಬೆಂಬಲ ಸೂಚಿಸಿದರು. ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಮುನಿರಾಜು ಚುನಾ ವಣಾಧಿಕಾರಿಯಾಗಿದ್ದರು.