ಸಂಕೇಶ್ವರ ಹೇಳಿಕೆಗೆ ತಿರುಗೇಟು: ಲಿಂಗಾಯತರು ಮೀಸಲಾತಿಗಾಗಿ ಭಿಕ್ಷೆ ಬೇಡಬಾರದು ಎಂಬ ಉದ್ಯಮಿ ವಿಜಯ ಸಂಕೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, ‘ನ್ಯಾಯಕ್ಕಾಗಿ, ಮೀಸಲಾತಿಗಾಗಿ ಹೋರಾಡುವುದು ನಮ್ಮ ಹಕ್ಕು. ಅದು ಭಿಕ್ಷಾಟನೆ ಅಲ್ಲ. ಎಲ್ಲರೂ ತಮ್ಮ ಜಾತಿ, ಧರ್ಮಕ್ಕಾಗಿ ಹೋರಾಡುತ್ತಾರೆ. 'ಅಹಿಂಸಾ' ಒಕ್ಕೂಟದ ಶೇ 82ರಷ್ಟು ಜನ ಬಡ್ತಿ ಮೀಸಲಾತಿ ರದ್ದತಿಗೆ ಹೋರಾಡುತ್ತಿದ್ದಾರೆ. ಅದು ಭಿಕ್ಷಾಟನೆಯೇ?’ ಎಂದು ಪ್ರಶ್ನಿಸಿದರು.