ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಪರಿಹರಿಸಲು ಗಮನ ಕೊಡುತ್ತೇನೆ. ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸನ್ನು 58ಕ್ಕೆ ಇಳಿಸುತ್ತೇನೆ. ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇನೆ.
ಪರೀಕ್ಷೆ, ಆಯ್ಕೆ ಎರಡೂ ಶಿಸ್ತಿನಿಂದ ನಡೆಯುವಂತೆ ನೋಡಿಕೊಳ್ಳುತ್ತೇನೆ. 1,600 ಚದರ ಅಡಿಗೂ ಹೆಚ್ಚು ಮನೆ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಸೌರ ವಿದ್ಯುತ್ ಅಳವಡಿಸಬೇಕೆಂಬ ನಿಯಮ ಜಾರಿ ಮಾಡುತ್ತೇನೆ.
ಕೋಮು ಗಲಭೆ ಇಲ್ಲದ ನೆಮ್ಮದಿಯ ಕರ್ನಾಟಕ ನನ್ನ ಕನಸು. ಮಠಗಳಿಗೆ ಬರುವ ಆದಾಯದ ಶೇ25 ರಷ್ಟು ಮೊತ್ತವನ್ನು ಶಿಕ್ಷಣಕ್ಕಾಗಿ ವಿನಿಯೋಗಿಸಬೇಕೆಂಬ ನಿಯಮ ಜಾರಿ ಮಾಡುತ್ತೇನೆ.